Ticker

6/recent/ticker-posts

Kannada general knowledge question answers part 13

: ಸಾಮಾನ್ಯ ಜ್ಞಾನ

1) ಸರ್ವಜ್ಞನ ವಚನವನ್ನು ಮೊದಲಿಗೆ
ಸಂಪಾದನೆ ಮಾಡಿದವರು ಯಾರು?
—ಉತ್ತಂಗಿ ಚೆನ್ನಪ್ಪ.

2) ಸಂತಾನ ರಹಿತ ವ್ಯಕ್ತಿಯ
ಆಸ್ತಿಯನ್ನು ರಾಜ ಆಕ್ರಮಿಸಿಕೊಳ್ಳುವ
ಪದ್ಧತಿಯನ್ನು ತೊಡೆದು ಹಾಕಿದವನು ಯಾರು?
ಗುಜರಾತಿನ ಕುಮಾರಪಾಲ.



3) ಕನ್ನಡದ ಮೊದಲ ಅಲಂಕಾರ ಗ್ರಂಥ
ಯಾವುದು?
— ಕವಿರಾಜ ಮಾರ್ಗ.

4) ಹೊಸಗನ್ನಡದ ಮೊದಲ ಸಾಮಾಜಿಕ
ನಾಟಕ ಎಂದು ಚಾರಿತ್ರಿಕ ಮಹತ್ವ ಲಭಿಸಿದ ಕೃತಿ
ಯಾವುದು?
— ಇಗ್ಗಪ್ಪ ಹೆಗಡೇ ವಿವಾಹ ಪ್ರಹಸನ.

4) 2014 ರ ವಿಂಬಲ್ಡನ್ ಪುರುಷರ ಸಿಂಗಲ್ಸ್
ನಲ್ಲಿ ಚಾಂಪಿಯನ್ ಆದವರು ಯಾರು?
— ನೋವಾಕ್ ಜೊಕೊವಿಕ್(ಸರ್ಬಿಯಾ)-

ಸ್ವಿಜರ್ಲೆಂಡ್ ನ ರೋಜರ್ ಫೆಡರರ್ ವಿರುದ್ಧ.
6) ಕನ್ನಡದ ಮೊದಲ ತ್ರಿಪದಿ ಶಾಸನ
ಯಾವುದು?
— ಬಾದಾಮಿ ಶಾಸನ.

7) 0 ಡಿಗ್ರಿ ಗ್ರೀನ್ ವಿಚ್
ರೇಖೆಯು ಪ್ರಪಂಚದಲ್ಲಿ ಸಮಭಾಜಕ
ವೃತ್ತವನ್ನು ಸಂಧಿಸುವ ಸ್ಥಳ ಯಾವುದು?
— ಆಫ್ರಿಕಾ ಖಂಡದ ಗಿನಿಯಾಕಾರಿ.

8) ಕೋಬರ್ ಗಡೆ, ಗವಾಯ್
ಗುಂಪು ಎಂದು ವಿಂಗಡನೆಯಾದ ಪಕ್ಷ
ಯಾವುದು?
— ರಿಪಬ್ಲಿಕನ್ ಪಕ್ಷ.

9) ಸಂಘಮಿತ್ರೆಯು ಶ್ರೀಲಂಕಾಕ್ಕೆ
ಕೊಂಡೊಯ್ದ ಭೋಧಿವೃಕ್ಷದ
ಕೊಂಬೆಯನ್ನು ಎಲ್ಲಿ ನೆಡಲಾಯಿತು?
— ಅನುರಾಧಪುರ.

10) ಪಾಶ್ಚಿಮಾತ್ಯರಲ್ಲಿ ಮೊಟ್ಟಮೊದಲಿನ
ಹಾಸ್ಯ ನಾಟಕಕಾರ ಯಾರು?
— ಸೋಪೋಕ್ಲಿಸ್.

11) ಭಾರತದ ಸುಪ್ರಿಂಕೋರ್ಟ್ ನ 42
ನೇ ಮುಖ್ಯ ನ್ಯಾಯಾಧೀಶರಾಗಿ
ನೇಮಕಗೊಂಡವರು?
— ನ್ಯಾ|| H.L. ದತ್ತು.

12) 'ಎಬೋಲಾ' ವೈರಸ್
ಮೊದಲು ಪತ್ತೆಯಾದದ್ದು ಎಲ್ಲಿ?
— ಡೆಮಾಕ್ರೆಟಿಕ್ ರಿಪಬ್ಲಿಕ್ ಆಪ್ ಕಾಂಗೋ (1976).

13) ಗಣಿತಶಾಸ್ತ್ರದ ನೊಬೆಲ್
ಎಂದೇ ಖ್ಯಾತವಾದ ಫೀಲ್ಡ್ ಮೆಡೆಲ್
(ಇನ್ನೊಂದು ಪ್ರಶಸ್ತಿ ಅಬೆಲ್ ಪ್ರಶಸ್ತಿ)
ಪ್ರಶಸ್ತಿಯನ್ನು (ಇತ್ತೀಚೆಗೆ 2014 ನೇ ಸಾಲಿನ)
ಪಡೆದ ಭಾರತೀಯ ಮೂಲದವರು ?
— ಮಂಜುಳಾ ಭಾರ್ಗವ.

14) ಭಾರತದ ಮೊದಲ ವಾಯುಸಾರಿಗೆ
ಎಲ್ಲಿಂದ ಎಲ್ಲಿಯವರೆಗೆ ಪ್ರಾರಂಭಿಸಲಾಯಿತು?
— ಅಲಹಾಬಾದ್ ನಿಂದ ನೈನಿವರೆಗೆ (1911).

15) ಇತ್ತಿಚೆಗೆ (2014 Sept 1) ಕರ್ನಾಟಕ ರಾಜ್ಯದ
18 ನೇ ರಾಜ್ಯಪಾಲರಾಗಿ
ನೇಮಕಗೊಂಡವರು?
— ವಾಜುಭಾಯಿ ವಾಲಾ (ಗುಜರಾತ).

16) ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ
(ಕೇರಳ) ರಾಜ್ಯದ ರಾಜ್ಯಪಾಲರಾಗಿ ಇತ್ತಿಚೆಗೆ
(2014, Sept, 5) ಅಧಿಕಾರ ವಹಿಸಿಕೊಂಡ
ಸುಪ್ರಿಂಕೋರ್ಟ್ ನ ಮುಖ್ಯನ್ಯಾಯಮೂರ್ತಿ
ಯಾರು?
— ಪಿ. ಸದಾಶಿವಂ.

17) ದೇಶದಲ್ಲೇ ಅತಿ
ಹೆಚ್ಚು ವಿಶ್ವವಿದ್ಯಾಲಯಗಳನ್ನು ಹೊಂದಿರುವ
ರಾಜ್ಯ ಯಾವುದು?
— ತಮಿಳುನಾಡು.

18) ಕನ್ನಡದ ಮೊಟ್ಟಮೊದಲ ಪದ 'ಇಸಿಲ'
ಅಶೋಕನ ಬ್ರಹ್ಮಗಿರಿ ಶಾಸನದಲ್ಲಿದೆ.

19) ಭಾರತದ ಏಕೈಕ ಕತ್ತೆಗಳ ಧಾಮವು ಎಲ್ಲಿದೆ?
— ಗುಜರಾತ.

20) ಪರಿಸರವನ್ನು ಕುರಿತ ಮೊದಲ ವಿಶ್ವ
ಸಂಸ್ಥೆಯ ಸಮಾವೇಶವು ಜೂನ್ 1972 ರಲ್ಲಿ
ಎಲ್ಲಿ ನಡೆಯಿತು?
— ಸ್ಟಾಕ್ ಹೋಮ್ .

21) ಏಷ್ಯಾ ಮತ್ತು ಯೂರೋಪ್
ಖಂಡಗಳನ್ನು ಬೇರ್ಪಡಿಸುವ
ಪರ್ವತಗಳು ಯಾವವು?
— ಯೂರಲ್ ಪರ್ವತಗಳು.

22) ಗಾಂಧೀಜಿಯವರು ಅಸಹಕಾರ
ಚಳುವಳಿಯನ್ನು ಹಿಂತೆಗೆದುಕೊಳ್ಳಲು ಕಾರಣ?
— ಚೌರಿಚೌರಾ ಘಟನೆ.

23) ಅಂತರ್ರಾಷ್ಟ್ರೀಯ ತಿಥಿರೇಖೆ
ಎಂದರೇನು?
— ಇದು 180⁰ ರೇಖಾಂಶವಾಗಿದೆ.

24) ಭಾರತಕ್ಕೆ ಸ್ವಾತಂತ್ರ್ಯ ಬಂದಾಗ
ರಾಷ್ಟೀಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದವರು?
— ಕೃಪಲಾನಿ.

25) ಧರ್ಮಕ್ಕೆ ಒಂದು ಸ್ಥಾನ ಮೀಸಲಿರಿಸಿರುವ
ಏಕೈಕ ವಿಧಾನಸಭೆ ಯಾವುದು?
— ಸಿಕ್ಕಿಂ ವಿಧಾನಸಭೆ (32 ಸ್ಥಾನಗಳಲ್ಲಿ 1
ಸಂಘಂ - ಬೌದ್ಧಧರ್ಮ ಕ್ಕೆ)

26) ದೇವದಾಸಿ ಪದ್ಧತಿಯ ಬಗ್ಗೆ
ವಿವರವನ್ನು ನೀಡುವ ಮೊದಲ ಶಾಸನ
ಯಾವುದು?
— ರಾಮಘರ ಶಾಸನ.

27) 'ಮಧ್ಯಪ್ರದೇಶದ ಜೀವನದಿ'
ಎಂದು ಕರೆಯಲ್ಪಡುವ ನದಿ?
— ನರ್ಮದಾ ನದಿ.

28) ಅಧಿಕಾರದಲ್ಲಿದ್ದಾಗಲೇ ವಿದೇಶದಲ್ಲಿ
ನಿಧನರಾದ ಭಾರತದ ಪ್ರಧಾನಿ?
— ಲಾಲ್ ಬಹದ್ದೂರ್ ಶಾಸ್ತ್ರಿ.

29) ಭೂದಾನ ಚಳುವಳಿಯನ್ನು ಎಲ್ಲಿ
ಆರಂಭಿಸಲಾಯಿತು?
— 'ತೆಲಂಗಾಣದ ಪೊಚಂಪಲ್ಲಿ'

30) 'ಕಂಪನಿ ಅಕ್ಬರನ'
ಎಂದು ಕರೆಯಲ್ಪಟ್ಟವರು?
— ಲಾರ್ಡ್ ವೆಲ್ಲೆಸ್ಲಿ.

31) ಕನ್ನಡ ಸಾಹಿತ್ಯ ಪರಿಷತ್ ನ ನೂತನ
ಘೋಷವಾಕ್ಯ ಯಾವುದು?
— "ಮನುಷ್ಯ ಜಾತಿ ತಾನೊಂದೆವಲಂ".

32) ಇತ್ತಿಚೆಗೆ (2014 Aug) ಕೇಂದ್ರ
ಲೋಕಸೇವಾ ಆಯೋಗದ ಅಧ್ಯಕ್ಷರಾಗಿ
ನೇಮಕಗೊಂಡವರು?
— ರಜ್ನಿ ರಜ್ದಾನ್ (Rajni Razdan)

33) ತೈಲೋತ್ಪಾದನೆಗಾಗಿ ಬಾಂಬೆ ಹೈನಲ್ಲಿ
1400 ಅಡಿ ಆಳದಿಂದ
ಕಚ್ಚಾತೈಲವನ್ನು ಉತ್ಪಾದಿಸಲು ನಿರ್ಮಿಸಿರುವ
ಪ್ಲಾಟ್ ಫಾರ್ಮ್ ಯಾವುದು?
— ಸಾಗರ್ ಸಾಮ್ರಾಟ್.

34) ಭಾರತದ 4 ನೇ ಉಪರಾಷ್ಟ್ರಪತಿಯಾಗಿ
ಕಾರ್ಯನಿರ್ವಹಿಸಿದ ಕರ್ನಾಟಕದ
ರಾಜ್ಯಪಾಲರು ಯಾರು?
— ಗೋಪಾಲ್ ಸ್ವರೂಪ್ ಪಾಠಕ್.

35) 'ಅಯ್ಯಂಗಾರ್ ಯೋಗ'
ಎಂದೇ ಹೆಸರಾಗಿದ್ದ, ಆಧುನಿಕ ಯೋಗದ
ಪಿತಾಮಹ (the Father of Modern Yoga)
ಎಂದು ಕರೆಯಲ್ಪಟ್ಟವರು ಯಾರು?
— ಬೆಳ್ಳೂರು ಕೃಷ್ಣಮಾಚಾರ ಸುಂದರ್ ರಾಜ
ಅಯ್ಯಂಗಾರ್.

36) ಮೊಟ್ಟೆ ಇಡುವ ಸಸ್ತನಿ ಪ್ರಾಣಿಗಳು?
— ಪ್ಲಾಟಿಪಸ್, ಯಕಿಡ್ನಾ.

37) ಸ್ತ್ರೀಯರಿಗೆ ಇದ್ದ ಆಸ್ತಿಯ
ಹಕ್ಕನ್ನು ಸಂಪೂರ್ಣವಾಗಿ
ಹೊರಟು ಹೋದದ್ದು ಯಾರ ಕಾಲದಲ್ಲಿ?
— ಗುಪ್ತರು.

38) "Not Just an Accountant" ಎಂಬ
ಗ್ರಂಥವನ್ನು ಬರೆದವರು ಯಾರು?
— (ಭಾರತದ ಮಾಜಿ ಕಂಪ್ಟ್ರೋಲರ್
ಮತ್ತು ಆಡಿಟರ್ ಜನರಲ್) ವಿನೋದ್ ರಾಯ್.

39) ಇತ್ತೀಚೆಗೆ (2014 Aug 13) ಭಾರತದ
ಲೋಕಸಭೆಯ 15 ನೇ ಉಪಸಭಾಪತಿಯಾಗಿ
ಆಯ್ಕೆಗೊಂಡವರು ಯಾರು?
— A.I.A.D.M.K ಯ ಸಂಸದ M.ತಂಬಿದುರೈ

40) ಸ್ವತಂತ್ರ ಭಾರತದಲ್ಲಿ ವಿತ್ತ ಸಚಿವರಾಗಿ
ಕಾರ್ಯನಿರ್ವಹಿಸಿದ ಮೊದಲ ಮಹಿಳಾ ವಿತ್ತ ಸಚಿವೆ
ಯಾರು?
— ಇಂದಿರಾ ಗಾಂಧಿ (1970-71).

41) S.L.ಭೈರಪ್ಪನವರ ಇತ್ತೀಚೆಗೆ
ಬಿಡುಗಡೆಯಾದ (ಜುಲೈ 29, 2014) ಕೃತಿ
ಯಾವುದು?
— ಯಾನ (29 ನೇ ಕಾದಂಬರಿ).

42) ಕನ್ನಡದ ಮೊದಲ ಸಾಮಾಜಿಕ ನಾಟಕ
ಯಾವುದು?
— ಇಂದಿರಾಬಾಯಿ.

43) 2014 ರ ವಿಂಬಲ್ಡನ್ ಮಹಿಳೆಯರ ಸಿಂಗಲ್ಸ್
ನಲ್ಲಿ ಚಾಂಪಿಯನ್ ಆದವರು ಯಾರು?
— ಪೆಟ್ರಾ ಕ್ವಿಟೋವಾ(ಜೆಕ್ ಗಣರಾಜ್ಯ) -
ಕೆನಡಾದ ಯುಗಿನಾ ಬೌಚಾರ್ಡ್ ವಿರುದ್ಧ.

44) ರಾಷ್ಟ್ರೀಯ ಗ್ರಾಮೀಣ ಉದ್ಯೋಗ
ಖಾತ್ರಿ ಯೋಜನೆಯು ಯಾವ
ನಿರುದ್ಯೋಗವನ್ನು ಹೋಗಲಾಡಿಸಲು
ಪ್ರಯತ್ನಿಸುತ್ತದೆ?
— ವಾಡಿಕೆಯ ಸ್ಥಿತಿಯ ನಿರುದ್ಯೋಗ.

Post a Comment

0 Comments